Kadalateerada Bhargava Karanthajja
ಜಗತ್ತಿನೆಲ್ಲಾ ಸೃಷ್ಟಿಯ ಬೇರು ಪ್ರಕೃತಿ., ಪ್ರಕೃತಿ ಅಧಮ್ಯ ನಿಗೂಢಗಳನ್ನು, ವಿಸ್ಮಯಗಳನ್ನು, ನಿರಂತರತೆಯನ್ನು ಮೌನವಾಗಿ ತನ್ನೊಳಗೆ ಲೀನವಾಗಿಸಿಕೊಂಡು ನೋಡುವ ಕಣ್ಣಿಗೆ ನಿರ್ಲಿಪ್ತವೂ, ನಿರ್ಭಾವುಕವೂ, ನಿರ್ವಿಕಾರವಾಗಿಯೂ ಗೋಚರಿಸುತ್ತದೆ. ಆದರೆ ನೋಡುವ ಶಕ್ತಿಗಿಂತ ಗ್ರಹಿಸುವ ಶಕ್ತಿ ಪ್ರಕೃತಿಯ ಪಿಸುಮಾತುಗಳನ್ನು ಎದೆಯಾಳಾದಾಳಕ್ಕೆ ದಕ್ಕಿಸುತ್ತದೆ. ಅಂಥಹ ಪಿಸುಮಾತುಗಳನ್ನು ಗ್ರಹಿಸಿ ತಮ್ಮ ಸಾಹಿತ್ಯದೊಳಗೆ ನಿರೂಪಿಸಿದ ಕನ್ನಡದ ಕೆಲವೇ ಬರಹಗಾರರಲ್ಲಿ ಶಿವರಾಮ ಕಾರಂತರು ಹಾಗೂ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಅಗ್ರಪಂಕ್ತೀಯರು. ಅದರಲ್ಲೂ ಶಿವರಾಮಕಾರಂತರು ಮಣ್ಣಲ್ಲಿ ಬೇರಡಗಿಸಿಟ್ಟು, ಮಣ್ಣಿನ ಸಾರ ಹೀರಿ ಬಾನಿನೆಡೆಗೆ ತೆರೆದು ನಿಂತ ಹೂವಿನ ಹಾಗೆ.! …